ನಾನೇ ಬರೆದ ಕಥೆಯು ಇಂದು.....
ಕೊನೆಗೆ ಬಂದು, ನಿಂತಿದೆ...
ವಿರಹವೋ, ಸನಿಹವೋ....
ನೋವನಂತೂ, ನೀಡಿದೆ...
ನಡೆದು ಬಂದ ದಾರಿ ...
ಯಾಕೋ, ಒಂಟಿಯಾಗಿ ಹೋಗಿದೆ,
ಮರಳಿ ಹೋಗೋ, ಆಸೆಯಾದರೂ...
ಸೇತುವೆಯೇ ಮುರಿದಿದೆ....
ಬರೆಯಲೇ, ಬೇಕು ..ಕೊನೆಯ ಸಾಲು...
ಮುಗಿಸಲೇ, ಬೇಕು..ಪಯಣದ..ಪಾಲು...
ನನಗೂ, ನಿನಗೂ, ಇಬ್ಬರಿಗೂ..
ಬರಲಿ ಹೊಸ ಊರು
ತರಲಿ..ಬದುಕಲಿ..
ನೆಮ್ಮದಿ ಚೂರು.....
ಗ . ಕಿರಣ
No comments:
Post a Comment