Saturday, February 27, 2010

ವಾಸ್ತವ-ಭಾಗ 2



ಆ ವರ್ಷದ ಪದವಿ ಪರೀಕ್ಷೆ ಮುಗಿದು, ಫಲಿತಾಂಶ ಹೊರಬಿದ್ದಿತ್ತು. ಮನೋಹರ ಉತ್ತಮ ಎನ್ನದಿದ್ದರೂ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ.ಸಹನಾ ಹತ್ತು ಅಂಕಗಳಿಂದ ದ್ವಿತೀಯ ದರ್ಜೆ ಪಡೆದಿದ್ದಳು.

ರಾಮರಾಯರು ವೃತ್ತಿಯಲ್ಲಿ ಮೇಷ್ಟ್ರಾದರ್ರೂ , ಮಕ್ಕಳ ಫಲಿತಾಂಶಕೆ ಎಂದೂ ಖುಷಿ ಅಥವಾ ಬೇಜಾರುಪಟ್ಟವರೇ ಅಲ್ಲಾ. ಇಬ್ಬರಿಗೂ ಒಂದೇ ಉತ್ತರ."ಸಂತೋಷ ಆಯ್ತು".ದೇವರು ಒಳ್ಳೆಯದು ಮಾಡಲಿ.



*********************************************************************************************************************************************************



ಮನೋಹರ ಅದಾಗಲೆ, ಕೆಲಸಕ್ಕೆ ಸೇರಬೆಕೆಂದು ನಿರ್ಧರಿಸಿಬಿಟ್ಟಿದ್ದ.ಇವನಂತೆ,ರಾಮರಾಯ ದಂಪತಿಗಳೂ, ಮಗನನ್ನು ಪರ ಊರಿಗೆ ಯಾವುದೇ ಕಾರಣಕ್ಕೂ ಕಳುಹಿಸಬಾರದು ಎಂದು ನಿರ್ಧರಿಸಿದ್ದರು.

ಕೆಲದಿನಗಳ ನಂತರ, ಮನೋಹರ ,ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೆಲಸ ಹುಡುಕಲು ಶುರುಮಾಡಿದ್ದ. ಮನೆಯ ಅರ್ಥಿಕ ಪರಿಸ್ಥಿತಿಯನ್ನು ಚೆನ್ನಾಗಿ ಬಲ್ಲವನಾದ್ದರಿಂದ, ಮತ್ತಷ್ಟು ದಿನ ಮಾತಾಪಿತರ ಆರ್ಥಿಕ ಹೊರೆ ಹೆಚ್ಹಿಸಲು ಇಷ್ಟವಿರಲ್ಲಿಲ್ಲ. ಇವೆಲ್ಲದರ ಮಧ್ಯೆ ಸಹನಾಳ ಹುಡುಗಾಟಿಗೆ ಬುದ್ಧಿ ಅರಿತವನಾಗಿದ್ದ.ಏನಾದರೂ ಉದ್ಯೋಗ ಮಾಡಲೇ ಬೇಕೆಂದು ಧೃಢ ನಿಶ್ಚಯದಲ್ಲಿದ್ದ.ಈ ಎಲ್ಲಾ ಜವಾಬ್ದಾರಿಯೊಂದಿಗೆ, ಮೈಸೂರಿನ ಜೊತೆ ಒಂದು ರೀತಿಯ ಮಧುರವಾದ ಅನುಭವವಿದೆ. ಮನಸ್ಸಿಗೆ ಎಷ್ಟೇ ಬೇಸರವಾದರೂ, ಗಂಗೋತ್ರಿಯ ಶಾಂತ ಪರಿಸರದಲ್ಲಿ ಒಂದು ವಿಹಾರ, ಮನಸನ್ನು ತಿಳಿಯಾಗಿಸುತ್ತಿತ್ತು.



ಕೆಲ ದಿನಗಳ ಹಿಂದೆ, ಕಾಲೇಜಿನಲ್ಲಿ ಕೊನೆಯ ವರ್ಷವಾದ್ದರಿಂದ ೨ ದಿನಗಳ ಪ್ರವಾಸ ಹೊರಡಲು ನಿಗದಿಯಾಗಿತ್ತು. ಶಿಕ್ಷಕ ವರ್ಗದಲ್ಲಿ ಸಭ್ಯ ಹುಡುಗನೆಂಬ ಖ್ಯಾತಿ ಇದ್ದರಿಂದ, ಮನುವಿಗೆ ಪ್ರವಾಸದ ಉಸ್ತುವಾರಿ ವಹಿಸಿದ್ದರು.ಯಾವುದೇ ಕೆಲಸವಾದರೂ ಅಚ್ಚುಕಟ್ಟಾಗಿ ಮಾಡುವ ಗುಣ ರಾಮರಾಯರಿಂದ ಹುಟ್ಟಿನಿಂದಲೇ ಬಂದಿತ್ತು. ಹೀಗಾಗಿ ಯಾರದೇ ಮನೆ ಮಂಗಳ ಕಾರ್ಯವಾದರೂ ಇಲ್ಲ ಎನ್ನದೇ ಉತ್ಸುಕತೆಯಿಂದ ಮಾಡುತ್ತಿದ್ದ. ಕೊನೆ ಮನೆಯ ಪರಮೇಶಿ ಅವನ ಅಕ್ಕನ ಮದುವೆ ಸಮಯದಲ್ಲಿ ಜವಾಬ್ದಾರಿ ಹೊರುವವರಿಲ್ಲದೇ ಪರಿತಪಿಸುತ್ತಿದ್ದಾಗ ಮನೆ ಮಗನಂತೆ ಎಲ್ಲಾ ಕೆಲಸ ಮಾಡಿದ್ದ. ಆದರೆ ಕೊನೆಯಲ್ಲಿ, ಹೊರಡುವಾಗ ಬೀಗರ ಕಳುಹಿಸಲು ಬರಬೇಕಿದ್ದ ಬಸ್ ಎರಡು ತಾಸು ತಡವಾಗಿದ್ದಕ್ಕೆ ಇವನ ಮೇಲೆ ಎಲ್ಲರೆದುರು ಕೂಗಡಿದ್ದ. ಮನಸು ಕದಡಿತ್ತು.ತನ್ನದಲ್ಲದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದ.



ಮದುವೆಗೆ ಮೊದಲಿನಿಂದ ಹಿಡಿದು, ಕೊನೆಯವರೆಗೂ ಕಾಯಿಸುವ ಗಂಡಿನ ಮನೆಯವರು, ಹೊರಡುವ ಸಮಯದಲ್ಲಿ ಸಂಯಮವಿಲ್ಲದೆ ಮಾತಾಡಿದ್ದರು. "ನಮ್ಮ ಕಡೆಯವರೇ ಇದ್ದರು. ಅವರಿಗೇ ಹೇಳಿದ್ದರೆ ಬರುತ್ತಿದ್ದರು" ಎನ್ನುವ ಒಕ್ಕಣೆ ಬೇರೇ. ನಿಜ ವಿಷಯವೇನೆಂದರೆ, ಬರುವಾಗಲೂ ಮನುವೇ ವಾಹನದ ಏರ್ಪಾಟು ಮಾಡಿದ್ದುದು. ಕೊನೆಗೂ ಬಸ್ ಬಂದಾಗ, ಎಲ್ಲರ ಗಮನ ಹೊರಡುವ ಕಡೆಗೆ.

ಮುದುಡಿದ ಮನಸಿಗೆ ತಂಪೆರಿದಿದ್ದು, ಅದೇ ಗಂಗೋತ್ರಿಯ ಮರದ ನೆರಳು, ನೈದಿಲೆ ಹಕ್ಕಿಯ ಕೂಗು, ಸಂಪಿಗೆ ಹೂ ಪರಿಮಳ.



**************************************************************************************************************************************************************

ಮನೆಯಲಿ ಬಿಗುವಿನ ವಾತಾವರಣ ಕಂಡು ಸಹನಾ ಹೆದರಿದ್ದಳು.ಬೀದಿ ಕೊನೆಯವರೆಗೂ ಜೊತೆಯಾಗಿ ಬಂದು ಬೀಳ್ಕೊಟ್ಟ ಸತೀಶನ್ನ ನೋಡಿ ಕೋಪಗೊಂಡಿದ್ದಾರೆಂದು ಮನದಲ್ಲಿ ಅಳುಕು. ಮತ್ತೊಂದೆಡೇ ಕೇಳಿದರೆ, ಜೊತೆಯಾಗಿ ಬಂದರೆ ತಪ್ಪೇನು ಎಂದು ವಾದಿಸುವ ಮನಸ್ಸು.



ವಾಸ್ತವವಾಗಿ, ಮನುವಿಗೆ, ಬೆಂಗಳೂರಿನಲ್ಲಿ, ಮೂರುವರೆ ಸಾವಿರ ರೂಪಾಯಿ ಮಾಸಿಕ ವರಮಾನದ ಒಂದು ನೌಕರಿ ದೊರಕಿತ್ತು. ಇವನ ಪರಿಸ್ಥಿತಿ ಬಲ್ಲ ಕಾಲೇಜಿನ ಅಕೌಂಟ್ಸ್ ವಿಭಾಗದ ತಿಪ್ಪೇಸ್ವಾಮಿ, ಬೆಂಗಳೂರಿನ ತಮ್ಮ ಪರಿಚಯಸ್ಥರಿಗೆ ಹೇಳಿ ಈ ನೌಕರಿ ಕೊಡಿಸಿದ್ದರು. ಹರಿಹರದ ಕಡೆಯವರು. ಕಷ್ಟ-ಸುಖ ಬಲ್ಲವರು.ಹಾಗಾಗಿ ಸಹಾಯ ಮಾದಿದ್ದರು.ತುಂಬಾ ಚಿಕ್ಕದಲ್ಲದಿದ್ದರೂ, ತಕ್ಕಮಟ್ಟಿಗಿದ್ದ ಕಂಪನಿ. ಕಾಮರ್ಸ್ ಓದಿದ್ದ ಮನುವಿಗೆ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕನಾಗಿ ನೌಕರಿ ದೊರಕಿತ್ತು.



ರಾಮರಾಯರದು ಒಂದೇ ತಗಾದೆ. ನೀನು ಕೆಲಸ ಮಾಡಲೇ ಬೇಕೆಂದರೆ, ಮೈಸೂರಿನಲ್ಲೇ, ಯಾವುದಾದರೂ ಕೆಲಸ ಹುಡುಕು.ಎಲ್ಲೋ ದೂರದಲ್ಲಿ ಹೋಗಿ ಕಷ್ಟಪಡುವುದಕ್ಕಿಂತ ಕಣ್ಣೆದುರೇ ಇರು ಎಂಬ ಬುದ್ಧಿ ಮಾತಿನ ರೂಪದ ಆಜ್ಞೆ. ಗಂಡನ ಮಾತಿಗೆ ಶಾರದಮ್ಮನವರ ಸಂಪೂರ್ಣ ಸಮ್ಮತಿ.ಮಗ ಮನೆಯಲ್ಲೇ ಇದ್ದರೆ, ಚೆನ್ನಾಗಿ ಊಟ, ತಿಂಡಿ ಮಾಡಿ, ಅವನ್ನನ್ನು ಸಂತೃಪ್ತಿಪಡಿಸಬಹುದು ಎಂಬ ಮಾತೃ ಪ್ರೀತಿ.



ಆದರೆ, ಮನುವಿನದು ಒಂದೇ ಹಠ. ನನ್ನ ಜೊತೆಗೆ ಸ್ನೇಹಿತರಿದ್ದಾರೆ. ಜೊತೆಯಾಗಿ ಸೇರಿ ಯಾವುದಾದರೂ, ರೂಮು ಬಾಡಿಗೆಗೆ ಹಿಡಿಯುತ್ತೇವೆ. ಅನ್ನ ಒಂದು ಮಾಡಿದರೆ, ಹೋಟೆಲಿಂದ ಸಾಂಬಾರ್ ತಂದರೆ ಕಥೆ ಕಳೆಯುತ್ತದೆ ಎನ್ನುವ ಸಮಜಾಯಿಷಿ.ಅಲ್ಲದೇ, ಬೆಂಗಳೂರು ವಿಶಾಲವಾಗಿದೆ.ಒಂದಲ್ಲ ಒಂದು ಎಂದು ಬಹುರಾಷ್ತ್ರೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಬಹುದು. ಮುಂದಿನ ಭವಿಷ್ಯಕೆ ಒಳ್ಳೆಯದಾಗುತ್ತದೆನ್ನುವ ತುಡಿತ ಅವನದು.



ಬೆಂಗಳೂರೆಂಬ ಬೆಂಗಳೂರೇ ಅಂಥಹುದು. ಮಾಯನಗರಿ.ಎಲ್ಲರನ್ನು ತನ್ನ ಒಡಲೊಳಗೆ ಇರಿಸಿಕೊಳ್ಳುವ ವಿಶಾಲ ಮನಸ್ಸು.ಯಾರನ್ನೂ ಬರಬೇಡಿ ಎನ್ನದ ಕಾಮಧೇನು. ಹಾಗಾಗಿ ಮನುವನ್ನೂ ಆಕರ್ಷಿಸಿದ್ದು ಅದೇ ಬಣ್ಣದ ಬದುಕು. ಕೊನೆಗೂ ಮನೆಯಲ್ಲಿ ಒಪ್ಪಿಗೆ ದೊರೆತ ಮೇಲೆ ಮನದಲ್ಲಿ ಒಂದು ರೀತಿ ಶಾಂತತೆ. ಎಷ್ಟೇ ಕಾರಣಗಳಿದ್ದರೂ, ಮೈಸೂರನ್ನು ತೊರೆಯುವುದು ಬಹಳ ಬೇಸರಪಡಿಸಿತ್ತು. ಇಲ್ಲಿಯ ಶಾಂತತೆ, ತಿಳಿ ಗಾಳಿ, ಎಲ್ಲಿಂದ ಎಲ್ಲಿಗೆ ಬೇಕಾದರೂ ನಡೇದೇ ಹೋಗಬಹುದಾದಷ್ಟು ಪುಟ್ಟ ನಗರಿ. ಒಂದು ರೀತಿಯ ಪ್ರೇಯಸಿಯ ಹಾಗೆ. ದೂರವಿದ್ದರೂ ಸನಿಹದಂತೆ.ಈ ಎಲ್ಲದರ ಮಧ್ಯೆ, ಸಹನಾಳು "ನನ್ನ ಬಿಟ್ಟು ಹೋಗ್ಬೇಡ್ವೋ" ಎಂದು ಹೇಳಿದ್ದಳು. ಮನೆಯಲ್ಲಿ ಇದ್ದಾಗ ಕಿತ್ತಾಡುತಿದ್ದವರು, ಈಗ ದೂರದೂರಿಗೆ ಹೊರಟಾಗ ಒಬ್ಬರನ್ನೊಬ್ಬರು ಬಿಡದಷ್ಟು ಬೆಸುಗೆ ಹಾಕಿತ್ತು.

**************************************************************************************************************************************************************

ಆಂದು ಬೆಳಗಿನ ರೈಲಿಗೆ ಹೊರಡಲು, ಮನು ತಯಾರಾಗುತ್ತಿದ್ದ.ಒಂದು ಕಡೆ ಸಂತೋಷವಿದ್ದರೂ ಮೈಸೂರು ಬಿಡುತ್ತಿದ್ದೇನಲ್ಲಾ ಎಂಬ ಬೇಸರ. ಒಮ್ಮೊಮ್ಮೆ ಬೇಡ, ಇಲ್ಲೇ ಇರೋಣ ಅನ್ನಿಸಿತ್ತಾದ್ದರೂ, ಕೊನೆಗೆ ಅದು ಸರಿಯಾದ ನಿರ್ಧಾರ ಅಲ್ಲವೆಂದು, ಹೊರಟಿದ್ದ. ಶಾರದಮ್ಮನವರು, ಅದು ತೆಗೆದು ಕೊಂಡೆಯೇನೋ, ಇದು ತೆಗೆದು ಕೊಂಡೆಯೇನೋ ಎಂದು ಪದೇ ಪದೇ ನೆನಪಿಸುತ್ತಿದ್ದರು. ರಾಮರಯರು ನಿಲ್ದಾಣಕ್ಕೆ ಬರಲು ಕೊಡೆ ಹುಡುಕುತ್ತಿದ್ದರು. ಯಾವಾಗಲೂ ಬಿಳಿ ಶುಭ್ರ ಪಂಚೆ, ಕರಿ ಕೋಟು, ಹಾಗು ನೆತ್ತಿಯ ಮೇಲೆ ಸೂರ್ಯ ಮಾರ್ಕಿನ ಕೊಡೆ. ಜೊತೆಗೆ ದಪ್ಪನೆಯ ಪಟ್ಟಿಯ ಚಪ್ಪಲಿ. ಸಹನಾ ಕೂಡ ಮನುವನ್ನು ಕಳುಹಿಸಲು ಮನಸಿಲ್ಲದ ಮನಸಿನಲ್ಲಿ ಅಣಿಯಾಗುತ್ತಿದ್ದಳು.



ಕೊನೆಗೂ ರೈಲ್ವೇ ನಿಲ್ದಾಣ ತಲುಪಿದಾಗ ೧೦ ಘಂಟೆ. ೧೧ ರ ರೈಲಿಗೆ ಹೊರಡಬೇಕಿತ್ತು. ಭಾನುವರವಾದ್ದರಿಂದ ಹೆಚ್ಚಿಗೆ ಜನಸಂದಣಿ ಇರಲಿಲ್ಲ. ೧೦.೩೦ ಕ್ಕೆ ರೈಲು ಪ್ಲಾಟ್ ಫಾರಂಗೆ ಬಂದು ನಿಂತಿತು. ಆರಾಮ ಖುರ್ಚಿಯಲ್ಲಿ ಪ್ರಯಾಣಿಸುವ ಬೋಗಿಯೇ ದೊರಕಿತು. ಮುಖದಲ್ಲಿ ಎಷ್ಟೇ ನಗುವಿದ್ದರೂ, ಮನದೊಳಗೆ ತನ್ನವರನ್ನು, ಬಿಟ್ಟು ಹೋಗುವಾ ಸಂಕಟ ಅವನನ್ನು ಬಾದಿಸುತಿತ್ತು.

**************************************************************************************************************************************************************
ಮುಂದುವರೆಯುವುದು>>>>>>>>>>>

Saturday, February 6, 2010

ವಾಸ್ತವ

ಆಗ ತಾನೇ ಊಟ ಮುಗಿಸಿ, ತನಗೆ ಆಗದಿದ್ದರು ಅಡಿಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಅಡಿಕೆ ಮೆಲ್ಲುತ, ಆರಾಮ ಖುರ್ಚಿಯಲ್ಲಿ ಮಧ್ಯಾನದ ತೂಕಡಿಕೆ ಆನಂದಿಸುತ್ತಿದ್ದರು ರಾಮರಾಯರು. ಮೈಸೂರಿನ ಜಯನಗರದ ಸರ್ಕಾರೀ ಶಾಲೆಯ ಮಾಸ್ತರು. ತುಂಬ ಅನುಕೂಲಸ್ತರು ಅಲ್ಲದಿದ್ದರೂ, ಮಧ್ಯಮ ವರ್ಗದ ಕುಟುಂಬ.ತಂದೆ ರಾಜಾಶ್ರಯದಲ್ಲಿ ಇದ್ದಾಗ ಕೊಟ್ಟ ಹೆಂಚಿನ ಮನೆ. ಪತಿಗೆ ಅನುರೂಪಳಾದ ಪತ್ನಿ ಶಾರದಮ್ಮ. ಆಡಂಬರದ ಜೀವನಕ್ಕೆ ಸಲಾಂ ಹೊಡೆದು ಮನೆ ನಡೆಸುತ್ತಿರುವ ಗೃಹ ಲಕ್ಷ್ಮಿ . ಇವರ ಪ್ರೀತಿಯ ಪ್ರತೀಕವಾಗಿ ಇಬ್ಬರು ಮಕ್ಕಳು. ಮನೋಹರ ದೊಡ್ಡವ, ಎರಡನೆಯವಳು ಸಹನಾ. ಮನೋಹರ ಹೆಸರಿಗೆ ತಕ್ಕವ. ಮನೋಹರವಾಗಿಯೇ ಇರುತ್ತಾನೆ. ಶಾರದಮ್ಮನಿಗೆ ಸಹನಾದೆ ಚಿಂತೆ. ಮೊದಲ ಪಿ.ಯು.ಸಿ ವ್ಯಾಸಾಂಗ. ಆದರೂ ಬುದ್ದಿ ವಿಹಲ್ವ. ಕೊಂಚವೂ ಬದುಕಿನ ಬಗ್ಗೆ ಯೋಚನೆ ಇಲ್ಲ. ಇಂದಿನದು ಇಂದು ನಾಳೆ ನನ್ನದಲ್ಲ ಎನ್ನುವ ಭಾವ.

ಮನೋಹರ ಇವಳ ಎಲ್ಲ ಗುಣಗಳಿಗೂ ವಿರುದ್ಧ. ಒಂದು ರೀತಿ "ತತ್ಸಮ,ತಧ್ಭವ". ಎರಡು ಒಂದೇ ಆದರೂ ವಿರುದ್ಧ ದಿಕ್ಕು. ಕೊನೆಯ ವರ್ಷದ ಬಿ.ಕಾಂ. ಅಷ್ಟೇನೂ ಬುದ್ದಿವಂತನಲ್ಲದಿದ್ದರೂ ಮನೆಯ ಪರಿಸ್ಥಿತಿ ಬಲ್ಲವನಾಗಿದ್ದ. ದುಂದು ವೆಚ್ಚ ಮಾಡದೆ ಜೀವನ ದುಡಿಸುತ್ತಿದ್ದ. ಸಹನಾಳು ಅದೇ ರೀತಿ ಇದ್ದರೂ ಗೆಳತಿಯರ ಜೊತೆ ಸೇರಿದಾಗ ಬುದ್ದಿ ಸ್ವಲ್ಪ ಕೆಡುತಿತ್ತು. ಬೇಡದ ವಸ್ತುವಿಗೆ ಹಣ ಹಾಕಿ ನಂತರ ಪರಿತಪಿಸುತ್ತಿದ್ದಳು.
ಇವಿಷ್ಟೂ ಮನೆಯವರ ಪರಿಚಯ.


ಮುಂದುವರೆಯುವುದು.................................

Wednesday, February 3, 2010

ಹೊಸ ಕಾದಂಬರಿ "ವಾಸ್ತವ"

ಮರಳಿ ಗೂಡಿಗೆ
ನನ್ನದೇ ಕಲ್ಪನೆಯ ಹೊಸ ಕಾದಂಬರಿ "ವಾಸ್ತವ" ಪ್ರಕಟಿಸುತಿದ್ದೇನೆ.

ಶೀಘ್ರದಲ್ಲಿ!!!!!!!!!!!!!!!

ನಿಮ್ಮ ಪ್ರೋತ್ಸಾಹ, ಸಲಹೆ, ಸೂಚನೆ ಅವಶ್ಯ...............
ನಿಮ್ಮವ ,
ನೆನಪು ಕಿರಣ್