Saturday, April 11, 2009

ನೀ .........

ತಂಗಾಳಿಯಂತೆ ನೀ ಬಂದೆ....
ಮನಕೆ, ಆನಂದ ತಂದೆ ..
ಕಹಿಯ ನೆನಪೇ ಬರದಂತೆ ..
ಸಿಹಿಯ ಗುಪ್ಪೆ ನೀ ತಂದೆ ..

ನೋವ ನಡುವೆ ..
ಪ್ರೀತಿಯ ಮುಲಾಮು ನಿನ್ನೊಲವೆ
ಹಚ್ಚು ಬಾ ಪ್ರೀತಿಯ ..
ಚುಚ್ಚು ಬಾ ಎದೆಯ ..
ನಿನ್ನ ಕಣ್ಣ ಸೂಜಿ ಇಂದ ..
ನೋವಾದರೂ ಏನೋ ಆನಂದ !!!!!!!!!!
ಮರೆತಿರುವೆ ಎಲ್ಲಾ … ನನ್ನ
ಜೊತೆಗಿರುವೆ ಅಲ್ಲ…

ತೊರೆಯದಿರು ಹೃದಯ ತೀರ …
ಅಪ್ಪಳಿಸುತ್ತಿರು ನನ್ನೆಡೆಗೆ ನೀರ ..
ಪ್ರೇಮ ಸಿಂಚನದಿ...
ಹೂವ ಕಂಪನದಿ …

ಮಾತಿಗೆ ಒಂದೇ ಅರ್ಥ ..
ಮೌನಕೆ ನಾನಾ ಅರ್ಥ …
ಪಿಸುಗುಡಲಿ ಹೂ ಮಾತೊಂದು ..
ಗುಟ್ಟು ಬಿಡಲಿ ..ಹೂ ಎದೆ ಇಂದು ..
ನೀ ಬರಲಿ ತಂಗಾಳಿಯಂತೆ ..
ಪ್ರೀತಿ ರಂಗೇರಿದಂತೆ …………………….

ಗ . ಕಿರಣ

No comments: