Monday, May 31, 2010

ಹೂ ಬನ

ಈ ಹೂವ ಬನಕೆ,ಮಧು ತುಂಬಿದೆ..
ಆ ನಗುವ,ಮೊಗಕೆ,ಕಳೆ ನೀಡಿದೆ..
ಎಲ್ಲಾ,ಮೊದಲು ಕಲಿತು,ಕೊನೆಯಾಗಿದೆ..
ಯಾವ ಮಾತು,ಮುಂದೆ ಬರಲೂ,ನಾಚಿದೇ..

ಚಿಟ್ಟೆ,ಹಾರಿ ಬರಲು,ಹೂ ಅರಳಿದೆ..
ಪುಟ್ಟ,ಹೆಜ್ಜೆ ಇಡುತ,ಹಾದಿ ಸಾಗಿದೇ..
ನಲ್ಲ ಬರುವ ಸಮಯಕೆ,ಹೂ ಮೊಗ ಕೆಂಪಾಗಿದೇ..
ಆ ಮಿಲನದಲ್ಲಿ, ರವಿ ಕಳೆದಿದೆ..
ಹೊತ್ತು ಮುಳುಗಲು, ಸಮಯ ನಿಲ್ಲ ಬೇಕಿದೆ..

ಕರೆದು, ಮೆಲ್ಲ ಹೊರಳಿ,ಅಲೆದಾಡಿದೆ..
ಎಲ್ಲಾ,ಗೆಳತಿ ಭೇಟಿ ನವಿರಾಗಿದೆ..
ಇಂದೇ ಮುಗಿವ ಜೀವಕೆ,
ಸವಿಯ ಮುತ್ತ ನೀಡಿದೆ..

ಬಾಡಿ ಹೋದ ಹೂವ,ನೆನಪಾಗಿದೆ..
ನಾಳೆ ನಗುತ ಬೆಳೆವ,ಮೊಗ್ಗೆಲ್ಲಿದೇ?
ನಿನ್ನಾ ಮಧುರ ನೆನಪೇ,ಅತಿಯಾಗಿದೆ..
ಬಾ ಒಲವ ಗೆಳತಿ,ಭೇಟಿ ಬೇಕಾಗಿದೆ...
ಈ ನಗುವ ಮನಕೆ,ಪ್ರೀತಿ ಹೂವಾಗಿಯೇ,
ಬಾಳ,ಸಂಚಿಕೆಯಲಿ, ಮುಖ ಪುಟವಾಗೇ..............

ಮೊದಲ ಹನಿ

ಮೊದಲ ಮೇಘ ಹನಿ ಜಾರಿ ಬಿತ್ತು ನಿನ್ನಲ್ಲೇ,
ಬೊಗಸೆ ಕಂಗಳಲಿ ಹರಿಯುವ ಮುನ್ನ......
ಧುಮ್ಮಿಕ್ಕೋ ಜಲಪಾತಕ್ಕೆ, ಹಸಿರ ಸಿರಿ ಮೋಡಿ ,
ಕಣ್ಣ ಹನಿಗೆ, ನಿನ್ನ ರೆಪ್ಪೆಯ ಸೆಳೆತದ ಜೋಡಿ......

ನಿಂತ ಮಳೆಗೆ ಮಣ್ಣಿನ ಸಹವಾಸ,
ಕಳೆದ ಹನಿಗೆ ಒಡಲ ಸೇರುವ ಸೆರೆವಾಸ...
ಬಹು ದಿನದ ಕೊಳೆ ಕಳೆವ ಇಳೆ,
ಮಲ್ಲಿಗೆ ಹೂ ತಂದಾಗ ಕರಗುವ ಬಳೆ......

ಹೂದೋಟಕೆ ದುಂಬಿಯ ಭೇಟಿ, ನವ ವಧು ರೀತಿ,
ನಲ್ಲೆಯ ಮುಡಿಗೆ ಮಲ್ಲಿಗೆ ಪ್ರೀತಿ, ಕಣ್ಣಲ್ಲಿ ಹೊಸ ಭೀತಿ..
ತುಂಬು ಸೌಂದರ್ಯದ ನಲ್ಲೆ, ನಡೆ ನೀ ಮೆಲ್ಲಗೆ,
ಹೂ ಲತೆ ಬಳ್ಳಿ, ಇಲ್ಲೇ, ಕಳೆದೋಯ್ತಲ್ಲೇ☺

ಪ್ರೀತಿ- ರಾತ್ರಿ

ಮರೆಯುತಿರೋ ನೆನಪ ತೆಗೆದು,
ಎದೆಯ ಪುಟವ ನೋಡಬೇಡ,
ಕರಗುತಿರೋ ಕನಸ ನೆನೆದು,
ಪ್ರೀತಿಯ ಕಡೆಗಣಿಸಬೇಡ..
ಪ್ರತಿ ಪುಟದ ಒಳಗೂನಿನ್ನದೇ.
ಕಾಲ್ನಡಿಗೆಯಾ ಹೆಜ್ಜೆ ಗುರುತು..
ಅಳಿಸಲಾಗದ ಹಚ್ಚೆ ಮನದೀ..

ಆ ದಿನದ ಸಲಿಗೆಗೆ..
ಸ್ನೇಹದ ಹೊಲಿಗೆಯ ಹಾಕಿ..
ಪ್ರೀತಿಯ ಚಾದರ ಹೊಲಿದೆ..
ಈ ಮನದ ಪ್ರತಿ ಸಾಲಿನ ಕೊನೆಗೆ..
ಆರದ ದೀಪವ ಹಾಕಿ,ಚಂದಿರನ ಮೊಗ ತೊಳೆದೆ..

ಕೂಡಿಸುವ ಲೆಕ್ಕ ಇರಲಿ..
ಕಳೆಯುವ ಭಾಗ ಬೇಡ..
ನೆತ್ತಿಯ ಸೂರ್ಯ ಬರುವರೆಗೂ...

ನೆರಳ ಜಾಡೇ ಹಿಡಿದು..
ನಿನ್ನನು ಹುಡುಕಿಸಬಲ್ಲೇ..
ಕರಾಳ ರಾತ್ರಿಲೂ ಕೂಡ,
ಬೆಳಕನು ಹರಿಬಿಡಬಲ್ಲೇ..
ಎಲ್ಲಾ ಕಾವಲು ದಾಟಿ..ನಿನ್ನ ನಿವಾಸ ಬರುವವರೆಗೂ..

ಸೆರೆಯಾಗುವ ಭೀತಿಗೇ ವನವಾಸ...

ಸವಿ ನೆನಪು

ಈ ಕವನವು, ಅವಳ ಸವಿ ನೆನಪಿಗಾಗಿ,
ನವಿರಾಗಿದೆ ಪ್ರತಿ ಪದವೂ, ನನ್ನದೇನೇ..
ಪ್ರಾಸದಲ್ಲೂ,ತ್ರಾಸವಿರದೇ,ಏರಿ ಬಂದ ಅಂಬಾರಿ..
ಮೆರೆಸಿ ಬಂದೂ ಕೇಳಲಿಲ್ಲವೇ..ರಾಜ-ಸಂದೇಶವು..
ಜೀವದಾ ಈ ಪಯಣದೀ ಏಕಾಂಗಿಯಾದೇ.....................

ಪದೇ, ಪದೇ ಜಗಳವ ಆಡಿ,
ಬರೆದಿಹ ಕವಿ ಎಲ್ಲಿ..
ನೆನೆಯುತ,ಮಳೆಯಲಿ ಹಾಡಿ..
ಕುಣಿದಿಹ ಮನಸ್ಸೆಲ್ಲಿ?
ನಮ್ಮ ಕವಿತೆಯ ಸಾಲು.
ಮರೆತು ಈಗ ಹೋಯ್ತು..
ಆ ಸಾಲನೇ ನೆನೆದು..
ಮಳೆಯೂ ಬಂದು ಹೋಯ್ತು..
ನೆನೆದಾಗ ಚಳಿಯಲ್ಲಿ..
ಆ ನೆನಪೇ ಮರೆತು ಹೋಯ್ತು....

ಸವಿ ನೆನಪು

ಈ ಕವನವು, ಅವಳ ಸವಿ ನೆನಪಿಗಾಗಿ,
ನವಿರಾಗಿದೆ ಪ್ರತಿ ಪದವೂ, ನನ್ನದೇನೇ..
ಪ್ರಾಸದಲ್ಲೂ,ತ್ರಾಸವಿರದೇ,ಏರಿ ಬಂದ ಅಂಬಾರಿ..
ಮೆರೆಸಿ ಬಂದೂ ಕೇಳಲಿಲ್ಲವೇ..ರಾಜ-ಸಂದೇಶವು..
ಜೀವದಾ ಈ ಪಯಣದೀ ಏಕಾಂಗಿಯಾದೇ.....................

ಪದೇ, ಪದೇ ಜಗಳವ ಆಡಿ,
ಬರೆದಿಹ ಕವಿ ಎಲ್ಲಿ..
ನೆನೆಯುತ,ಮಳೆಯಲಿ ಹಾಡಿ..
ಕುಣಿದಿಹ ಮನಸ್ಸೆಲ್ಲಿ?
ನಮ್ಮ ಕವಿತೆಯ ಸಾಲು.
ಮರೆತು ಈಗ ಹೋಯ್ತು..
ಆ ಸಾಲನೇ ನೆನೆದು..
ಮಳೆಯೂ ಬಂದು ಹೋಯ್ತು..
ನೆನೆದಾಗ ಚಳಿಯಲ್ಲಿ..
ಆ ನೆನಪೇ ಮರೆತು ಹೋಯ್ತು....