ಕಲ್ಪನಾ ಶಕ್ತಿ.....ಹೃದಯ ಕೋಣೆಯಲ್ಲಿ ಅರಳಿದ ಭಾವನೆಗಳಿಗೆ ಒಂದು ಚೌಕಟ್ಟು ಹಾಕಿ, ಅಳೆದು, ಸುರಿದೂ ಬರೆದಿರುವ ಗದ್ಯ-ಪದ್ಯ ಸಂಗಮ. ಬೇಸರಿಕೆ ಕಳೆಯಲು ಕಟ್ಟಿದ ಕವನ,ಜೀವನದ ಪ್ರತಿ ಪುಟದಲೂ ಆವರಿಸಿಬಿಟ್ಟಿದೆ. ಈ ಕಲ್ಪನಾ ಶಕ್ತಿ ಅಮರವಾಗಿರಲು ನನ್ನ ಪುಟ್ಟ ಪ್ರಯತ್ನದ ಫಲವಾಗಿ, ಈ ಕಲ್ಪನಾ ಕೂಸು. ಹರಸಿ, ಅರಸಿ
Monday, June 15, 2009
ಮೆರವಣಿಗೆ ...........
ಮರೆತ ಆ ದಿನಗಳ,
ನೆನಪಿಸೋ ಗಡಿಯಾರ ನೋಡಿ... ಮರೆತಿಲ್ಲ ಯಾವುದೇ ಗಡಿಗಳ....................
ಕಳೆದ ದಾರಿಗೆ, ಬಾಲ್ಯ ಎನ್ನಬಹುದೇ?
ಬೆಳೆದ ಕೇರಿಗೆ, ಕೋಟೆ ಅನ್ನ ಬಹುದೇ? ಎಲ್ಲ ಕಾವಲು ದಾಟಿ...................... ಬರಬಹುದೇ ಕನಸ ಊರಿಗೆ,
ಕಣ್ಣ ಬಾಗಿಲ ತೆರೆಸದೇನೆ!!!!!!!!!!
ಕಂಡ ಆ ಹುಡುಗಿಗೆ,
ಚೆಲುವೆನ್ನ ಬಹುದೇ?
ಮೊಂಡ ಆ ಮನಸಿಗೆ,
ಚಾಟಿಯ ಬೀಸ ಬಹುದೇ?
ತುಂಬಿದ ಕಣ್ಣ ಹನಿಗೆ,
ಹೊರ ಬಾರದ ದುಃಖ...
ಮರೆತು ಹೋದ ಹೆಣ್ಣಿಗೆ,
ದೂರ ಸರಿದ ಮುಖ.....
ಮರೆತೆಯಲ್ಲಾ, ಸಾಕಿನ್ನು..ನೆನಪ ....................
ಮೆರವಣಿಗೆ >>...............
Sunday, June 14, 2009
ಅಮ್ಮ .........
ಹೊಸ ಕವನಗಳ ಬಿಡುಗಡೆ!!!!!!!!!!!!!
ಬದುಕಲಿ ಬಾಡದ ಹೂವ,
ಬೆಳೆಸುವ ಮಾಲಿಯೂ ಆಗಿ..
ಹದವ ಮಾಡದ, ಮಣ್ಣ ಮನಕೆ,
ಮೆದುವಾಗಿ ಗುದ್ದಲಿ ತಗಲಿ......
ನೋವೆ ಆದರೂ ಕೂಡ,
ಹೂವೆ ಬರುವಾಗ..ನೋಡಿ...
ಆಗಲೀ ಸಾವಿರ ಹೋರಾಟ!!!!!!!!!!!
ಗ.ಕಿರಣ್
ಬೆಳೆಸುವ ಮಾಲಿಯೂ ಆಗಿ..
ಹದವ ಮಾಡದ, ಮಣ್ಣ ಮನಕೆ,
ಮೆದುವಾಗಿ ಗುದ್ದಲಿ ತಗಲಿ......
ನೋವೆ ಆದರೂ ಕೂಡ,
ಹೂವೆ ಬರುವಾಗ..ನೋಡಿ...
ಆಗಲೀ ಸಾವಿರ ಹೋರಾಟ!!!!!!!!!!!
ಗ.ಕಿರಣ್
Subscribe to:
Posts (Atom)