Monday, June 15, 2009

ಮೆರವಣಿಗೆ ...........


ಮರೆತ ಆ ದಿನಗಳ,
ನೆನಪಿಸೋ
ಗಡಿಯಾರ ನೋಡಿ... ಮರೆತಿಲ್ಲ ಯಾವುದೇ ಗಡಿಗಳ....................

ಕಳೆದ
ದಾರಿಗೆ, ಬಾಲ್ಯ ಎನ್ನಬಹುದೇ?
ಬೆಳೆದ
ಕೇರಿಗೆ, ಕೋಟೆ ಅನ್ನ ಬಹುದೇ? ಎಲ್ಲ ಕಾವಲು ದಾಟಿ...................... ಬರಬಹುದೇ ಕನಸ ಊರಿಗೆ,
ಕಣ್ಣ
ಬಾಗಿಲ ತೆರೆಸದೇನೆ!!!!!!!!!!


ಕಂಡ ಹುಡುಗಿಗೆ,
ಚೆಲುವೆನ್ನ ಬಹುದೇ?
ಮೊಂಡ ಮನಸಿಗೆ,
ಚಾಟಿಯ ಬೀಸ ಬಹುದೇ?

ತುಂಬಿದ ಕಣ್ಣ ಹನಿಗೆ,
ಹೊರ ಬಾರದ ದುಃಖ...
ಮರೆತು ಹೋದ ಹೆಣ್ಣಿಗೆ,
ದೂರ ಸರಿದ ಮುಖ.....
ಮರೆತೆಯಲ್ಲಾ, ಸಾಕಿನ್ನು..ನೆನಪ ....................
ಮೆರವಣಿಗೆ >>...............

Sunday, June 14, 2009

ಅಮ್ಮ .........


ಅಳುವಾಗ ಅಮ್ಮ ನಿನ್ನ ನೆನಪೇ...
ಮಲಗೋ ಮುನ್ನ ನನ್ನೇ ಹರಸೇ..
ಬರದಿರಲಿ ಯಾವುದೇ ಭೀತಿ,
ಅದಕಿಂತ ಮಿಗಿಲಿಲ್ಲ ಯಾವುದೇ ಪ್ರೀತಿ...
ತೊಟ್ಟಿಲ್ಲಲ್ಲೇ ಮಲಗೋ..ಆಸೆ!!!!!!!!!!

ಹೊಸ ಕವನಗಳ ಬಿಡುಗಡೆ!!!!!!!!!!!!!

ಬದುಕಲಿ ಬಾಡದ ಹೂವ,
ಬೆಳೆಸುವ ಮಾಲಿಯೂ ಆಗಿ..
ಹದವ ಮಾಡದ, ಮಣ್ಣ ಮನಕೆ,
ಮೆದುವಾಗಿ ಗುದ್ದಲಿ ತಗಲಿ......

ನೋವೆ ಆದರೂ ಕೂಡ,
ಹೂವೆ ಬರುವಾಗ..ನೋಡಿ...
ಆಗಲೀ ಸಾವಿರ ಹೋರಾಟ!!!!!!!!!!!

ಗ.ಕಿರಣ್