ಆಗ ತಾನೇ ಊಟ ಮುಗಿಸಿ, ತನಗೆ ಆಗದಿದ್ದರು ಅಡಿಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಅಡಿಕೆ ಮೆಲ್ಲುತ, ಆರಾಮ ಖುರ್ಚಿಯಲ್ಲಿ ಮಧ್ಯಾನದ ತೂಕಡಿಕೆ ಆನಂದಿಸುತ್ತಿದ್ದರು ರಾಮರಾಯರು. ಮೈಸೂರಿನ ಜಯನಗರದ ಸರ್ಕಾರೀ ಶಾಲೆಯ ಮಾಸ್ತರು. ತುಂಬ ಅನುಕೂಲಸ್ತರು ಅಲ್ಲದಿದ್ದರೂ, ಮಧ್ಯಮ ವರ್ಗದ ಕುಟುಂಬ.ತಂದೆ ರಾಜಾಶ್ರಯದಲ್ಲಿ ಇದ್ದಾಗ ಕೊಟ್ಟ ಹೆಂಚಿನ ಮನೆ. ಪತಿಗೆ ಅನುರೂಪಳಾದ ಪತ್ನಿ ಶಾರದಮ್ಮ. ಆಡಂಬರದ ಜೀವನಕ್ಕೆ ಸಲಾಂ ಹೊಡೆದು ಮನೆ ನಡೆಸುತ್ತಿರುವ ಗೃಹ ಲಕ್ಷ್ಮಿ . ಇವರ ಪ್ರೀತಿಯ ಪ್ರತೀಕವಾಗಿ ಇಬ್ಬರು ಮಕ್ಕಳು. ಮನೋಹರ ದೊಡ್ಡವ, ಎರಡನೆಯವಳು ಸಹನಾ. ಮನೋಹರ ಹೆಸರಿಗೆ ತಕ್ಕವ. ಮನೋಹರವಾಗಿಯೇ ಇರುತ್ತಾನೆ. ಶಾರದಮ್ಮನಿಗೆ ಸಹನಾದೆ ಚಿಂತೆ. ಮೊದಲ ಪಿ.ಯು.ಸಿ ವ್ಯಾಸಾಂಗ. ಆದರೂ ಬುದ್ದಿ ವಿಹಲ್ವ. ಕೊಂಚವೂ ಬದುಕಿನ ಬಗ್ಗೆ ಯೋಚನೆ ಇಲ್ಲ. ಇಂದಿನದು ಇಂದು ನಾಳೆ ನನ್ನದಲ್ಲ ಎನ್ನುವ ಭಾವ.
ಮನೋಹರ ಇವಳ ಎಲ್ಲ ಗುಣಗಳಿಗೂ ವಿರುದ್ಧ. ಒಂದು ರೀತಿ "ತತ್ಸಮ,ತಧ್ಭವ". ಎರಡು ಒಂದೇ ಆದರೂ ವಿರುದ್ಧ ದಿಕ್ಕು. ಕೊನೆಯ ವರ್ಷದ ಬಿ.ಕಾಂ. ಅಷ್ಟೇನೂ ಬುದ್ದಿವಂತನಲ್ಲದಿದ್ದರೂ ಮನೆಯ ಪರಿಸ್ಥಿತಿ ಬಲ್ಲವನಾಗಿದ್ದ. ದುಂದು ವೆಚ್ಚ ಮಾಡದೆ ಜೀವನ ದುಡಿಸುತ್ತಿದ್ದ. ಸಹನಾಳು ಅದೇ ರೀತಿ ಇದ್ದರೂ ಗೆಳತಿಯರ ಜೊತೆ ಸೇರಿದಾಗ ಬುದ್ದಿ ಸ್ವಲ್ಪ ಕೆಡುತಿತ್ತು. ಬೇಡದ ವಸ್ತುವಿಗೆ ಹಣ ಹಾಕಿ ನಂತರ ಪರಿತಪಿಸುತ್ತಿದ್ದಳು.
ಇವಿಷ್ಟೂ ಮನೆಯವರ ಪರಿಚಯ.
ಮುಂದುವರೆಯುವುದು.................................
2 comments:
hi
nice one.. very intresting ...
what's next.
will publish tomorrow......kadambariya nayaka Manohara
Post a Comment